Monday, November 15, 2010

ಬುಗುರಿ





ಏನಾದರೂ ಸರಿಯೇ 
ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸೋದೆ ಹೆಗ್ಗುರಿ 
ಎಂದೆಲ್ಲ ಬಡಬಡಿಸಿ,ಹುರುಪಿನಿಂದಲೇ ಎಲ್ಲಾ ಕಚೇರಿ ಗಳನು ತಿರುಗಿ,
ಕೇಳಿದವರಿಗಿಷ್ಟು, ಬೇಡಿದವರಿಗಿಷ್ಟು ,
ಎಂದೆಲ್ಲ ಹಣವ ಚೆಲ್ಲಿ ....
ಎಲ್ಲಾ ದಸ್ತಾವೇಜುಗಳ ಜಾಲಾಡಿ, 
ಕೇಸು ಜಡಿದವರೀಗ,  
 ಕೊನೆಗೆ, ಕಟ್ಟ ಕಡೆಗೆ ,ಚಟ್ಟವೇರಿ.....     
ಅವರ ವಾರಸುದಾರರೆಲ್ಲ ಸುತ್ತುತ್ತಲೇ ಇದ್ದಾರೆ  
ಚಾವಟಿಯಿಲ್ಲದ ಬುಗುರಿಯಂತೆ 

2 comments:

  1. ತುಂಬಾ ಪ್ರಸ್ತುತ ಚುಟುಕು. ತಮ್ಮ ಮಾತು ಅಕ್ಷರಶಃ ಸತ್ಯ. ನಮ್ಮ ಕೊರ್ಟ್-ಗಳಲ್ಲಿನ ಹೆಚ್ಚಿನ ಕೆಸಗಳು ಒಣ ಪ್ರತಿಷ್ಟೆಗೆ ಯಾರೋ ಮಾಡಿದ್ದು ಯಾರೋ ಅನುಭವಿಸುವ೦ತಿವೆ.

    ReplyDelete
  2. ಚಟ್ಟವೇರುವ ಮುನ್ನ ಜೀವನದ ಅರಿವಾಗಿದ್ದರೆ..
    ಕೋರ್ಟ್,ಕಛೇರಿ ಎಂದು ಅಲೆಯದಿದ್ದರೆ...
    ಚಾವಟಿಯಿಲ್ಲದ ಬುಗುರಿಯಂತೇ ನೀವಾಗಿರುತ್ತಿದ್ದಿರಿ..!!

    ReplyDelete