Saturday, March 26, 2011


ಏಕೆ ಕಾಡುವೆ ಹೀಗೆ ಮನದ ಸುತ್ತ ..
ಬಚ್ಚಿಟ್ಟು ಸಮಾಧಿ ಮಾಡಿದ ಬಾವನೆಗಳೆಲ್ಲ 
ಮತ್ತೇಕೆ ಕೆದಕುವೆ ?
ಎಲ್ಲ ನೆನಪುಗಳ ಮುಚ್ಚಿಟ್ಟು...
ನಾ ಒಂಟಿಯಾಗಿರಲು ಬಯಸುವಾಗ ..
ಮತ್ತೇಕೆ ನೆನಪಿಸುವೆ ಕಳೆದ ಆ ಕ್ಷಣಗಳೆಲ್ಲ ...
ಹೌದು ... ನಿನ್ನ ನಗುವಿಗೆ ಅರ್ಥ ಕೊಡಲು ಹೋದೆನಲ್ಲ 
ಅದು ನನ್ನ ತಪ್ಪೇ ....???
ಆದರೆ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ 
ನಾ ಏನ ಹೇಳಲಿ 
ಕಳೆದ ಮುಸ್ಸಂಜೆ ... ಕಳೆದ ಸಮಯ .. ಆಡಿದ ಪಿಸುಮಾತುಗಳಿಗೆಲ್ಲ
ಅರ್ಥ ಕೊಡಲಿಲ್ಲವೇಕೆ...?
ಮನದ  ದುಗುಡಗಳೆಲ್ಲ ಮುಚ್ಚಿಟ್ಟು...ಮನದ ಭಾವನೆಗಳೆಲ್ಲ 
ತೆರೆದಿಟ್ಟ ಆ ಕ್ಷಣಗಳಿಗೆ ... ಅರ್ಥ ಕೊಡಲಿಲ್ಲವೇಕೆ ...
ಪ್ರೀತಿ ಬರೀ ನಿರರ್ಥಕವೆಂದೆ ...????

Tuesday, March 15, 2011

ಈ ಪ್ರೀತಿ ಎನ್ನುವುದು .. ಕೆಂಪು ತುಟಿ ಬಿರಿದು 
ಹೂ ನಗೆ ಎಸೆದು ,ಕಣ್ಣು ಮಿಟುಕಿಸಿ ಕೆಣಕುವಾಗ
ಎದೆಯಲ್ಲೇನೋ  ಕಂಪನದ ಅಲೆ ..
ಈ ಪ್ರೀತಿ ಎನ್ನುವುದು ಕಂಡ ಕೂಡಲೇ ಪುಳಕಿಸಿ
  ಮಾತನಾಡಲು ತವಕಿಸಿ , ಎದುರಿಗೆ ಹೋದಾಗ 
ಸಣ್ಣಗೆ ನಡುಗಿಸಿ ಸಾಧ್ಯವಾಗದೆ ಮತ್ತೆ ಬರುವ ...
ಈ ಪ್ರೀತಿ ಎನ್ನುವುದು ಕಣ್ಣ ನೋಟ ಕೂಡಲು..
ಹೃದಯ ಮಾತನಾಡಲು ,ಬಾವನೆಗಳೇ ಉಕ್ಕೇರಿ ಬರುವ 
ಸಾಗರದ ಅಲೆ ...
ಈ ಪ್ರೀತಿ ಎನ್ನುವುದು ಹೃದಯದಲಿ ಬಚ್ಚಿಟ್ಟುಕೊಂಡ ಯಾತನೆ ... 
ಮೇಲೆ ಕಾಣುವುದು ಎಲ್ಲೆಡೆ ಹಸಿರ ಎಲೆ 
ಆದರೆ ಒಳಗೆ ಮಾತ್ರ ತಲ್ಲಣದಾ  ಮಳೆ ...
  

Saturday, March 12, 2011






ಪ್ರಿಯೇ ಇನ್ನೂ ಏಕೆ ಈ ನಾಟಕ ?

ಬೇಕಲ್ಲವೇ ನಿನಗೆ ನನ್ನ ಜಾತಕ ..

ಅದಕ್ಕೇಕೆ ನಾಚಿಕೆ ,

ಹೇಳಬಾರದಿತ್ತೆ ಮನದ ಆಸೆಯ ?

ಕಣ್ಣ ನೋಟದಲ್ಲಿಯೇ ತಿಳಿಸಿದೆ ನನ್ನ ಆಸೆಯ 

ಮೂರು ಗುಲಾಬಿಯ ಮೂಲಕ ಕಳುಹಿಸಿದೆ 


ನನ್ನ ಬಾವನೆಗಳ .....

ಆದರೇನು ..

ನಮ್ಮಿಬ್ಬರ ಮನಸುಗಳೆರಡು ಕೂಡಲು

ನಮಗೇಕೆ ಜಾತಕ ?

ಆದರೂ ನನಗಾಗಿ ಕಾದಿಡು ನಿನ್ನ ಜಾತಕ...  

Tuesday, March 8, 2011



ಯಾರಿಗೂ ಗೊತ್ತಾಗದೆ ಬಂದವಳು
ತಾನೆಂದು ಅಂದುಕೊಂದಿದ್ದಳವಳು !
ಅವಳು ಹೃದಯದ ಬಾಗಿಲ ಕಡೆ
ಹೆಜ್ಜೆ ಇಟ್ಟಾಗಲೇ ಬೋರ್ಗರೆದಿತ್ತು ಮನ
ಹುಣ್ಣಿಮೆಯ ರಾತ್ರಿಯ ಕಡಲಿನಂತೆ....

ಕದ್ದೊಯ್ಯಲಿ ಸರ್ವಸ್ವವನ್ನು ಎಂದು
ಸುಮ್ಮನೆ ಕುಳಿತಿದ್ದೆ.........
ಮಾರಕಾಸ್ತ್ರಗಳಿಲ್ಲದೆ, ರಕ್ತಪಾತವಿಲ್ಲದೇ
ಕೇವಲ ಕುಡಿ ನೋಟದಿಂದಲೇ ಇರಿದು
ಎಲ್ಲವನ್ನೂ ಬಾಚಿ ಕಟ್ಟಿಕೊಂಡಳವಳು
ಒಂದಿನಿತೂ ನನಗೆ ಉಳಿಸದೆ !

ಅನುಕಂಪವೋ ಅನುರಾಗವೋ ಕಾಣೆ
ಬಿಟ್ಟು ಹೋಗಿದ್ದಳವಳು ತನ್ನ ಹೃದಯವನ್ನೇ
ಇಲ್ಲೇ ನನ್ನ ಒಳಗೆ ..........
ಕಳ್ಳತನವೂ ಇಷ್ಟೊಂದು ಸಿಹಿಯೇ ??

(ಸ್ನೇಹಿತ ಅಶೋಕ್ ಭಾಗಮಂಡಲ ಬರೆದದ್ದು ...)