Monday, November 7, 2011



ಅದಾರೋ ಪವಾಡ ಪುರುಷ ತನ್ನ ಭಕ್ತಿಯ ಪರಾಕಾಷ್ಟೆ ಮೆರೆದ ನಾಲ್ಕು ಸಾವಿರ 
ವರ್ಷದ ಹಿಂದೆ , ಭಗವಂತನಿಗೆ ಪ್ರೀತಿಯ ಧಾರೆಯೆರೆಯಲು ಹೋಗಿ ತನ್ನ 
ಮಗನನ್ನು ಬಲಿಕೊಟ್ಟ ...  ಭಗವಂತನೂ ದಯಾಮಯಿಯೇ ... ಭಕ್ತನ ಪರೀಕ್ಷಿಸಬೇಕಲ್ಲ ..
ಅಗ್ಗಾಗ್ಗೆ ಅವನಿಗೂ ಪರೀಕ್ಷೆ ಮಾಡುವ ಮನಸ್ಸಾಗುತ್ತದೆ ...  
ಅಂದೇ ತನ್ನ ಭಕ್ತನ ಭಕ್ತಿಗೆ ಮೆಚ್ಚಿಅವನ ಮಗನ ಬದಲು  ಮೂಕ ಪ್ರಾಣಿಯ ಬಲಿ ತೆಗೆದ ...
ಅದೇ ಧರ್ಮ ,ಶಾಂತಿ ,ತ್ಯಾಗ ಬಲಿದಾನ , ಎಂದು ಹೆಸರೂ ಕೊಟ್ಟ ...
ಅಲ್ಲಿಂದ ಶುರುವಾಯಿತು ,,.. ಭಕ್ತಿಯ ಪರಾಕಾಷ್ಟೆ ... ಅವನಿಗೆ ದೇವರ ಪಟ್ಟ ಕಟ್ಟಿ...
ಅವನೋ ಏನೋ ತೋರಿಸಿಕೊಳ್ಳಲು ಹೋಗಿ ..ಮತ್ತೇನನ್ನೋ ತೋರಿಸಿ ಸತ್ತ ...
ಇವರಿಗೋ ಕಾರಣಗಳು ಬೇಕು ... ಅವರಲ್ಲೊಬ್ಬ ನಾವೇ ಶ್ರೇಷ್ಠ ,..ನಮ್ಮ ದೇವರೇ ಸತ್ಯ ಎಂದು ಯುದ್ದ ಮಾಡಿದ ..
 ಸೇರದವರನ್ನ ಕಾಫೀರರುಗಳು ಎಂದು ಕೊಂದ... ಆ ಪ್ರಾಣಿಯ ?? ಅವರು ಪೂಜಿಸುವರ ?? ಹಾಗಿದ್ದರೆ 
ಅದು ನಮ್ಮ ದೇವರಿಗೆ ಶ್ರೇಷ್ಠ ಎಂದ ,,.ಅದನ್ನೇ ಶತಮಾನಗಳಿಂದ ಮುಂದುವರೆಸಿಕೊಂಡು ಬಂದ...
ಪಾಪ ಮೂಕ ಪ್ರಾಣಿಗೆನು ಗೊತ್ತಿತ್ತು ,ತಾನೇ ಬಲಿ ಎಂದು ... ಅದಾರೋ ವರ್ಷಕೊಮ್ಮೆ ಸಿಂಗರಿಸಿ  ಪೂಜಿಸುತ್ತರಲ್ಲ 
ಕಾಯಿ ಕಡುಬು , ಕಜ್ಜಾಯಗಳ ಮಾಡಿ ತಿನ್ನಿಸುತ್ತಾರಲ್ಲ... ಅವರಂತೆ  ಇವರು ಎಂದು ತಿಳಿದಿತ್ತೋ ಏನೋ ..
ನಾನೂ ಸುಮಾರು ದಿನಗಳಿಂದ ನೋಡುತ್ತಿದ್ದೆ  ನಾ ಬರುವ ದಾರಿಯಲ್ಲಿ ಸಿಂಗರಿಸಿ ನಿಂತ ಆ ಮೂಕ ಪ್ರಾಣಿಗಳ ...
ನನಗಂತೂ ಗೊತ್ತಿತ್ತು .. ಕುರಿ ಕೊಬ್ಬಿದಷ್ಟೂ ಕಟುಕನ ಹೊಟ್ಟೆ ತುಂಬುತ್ತೆ ಅಂತ ... 
ಆದರೆ ಆ ಮೂಕ ಪ್ರಾಣಿಯ ಹೊಟ್ಟೆಗೆ ಮಾತ್ರ ಹಿಡಿ ಹುಲ್ಲು , ಮಳೆ ಬಂದರೆ ಮೇಲೊಂದು ಶೀಟು ಅಷ್ಟೇ ...
ಇವರೆಲ್ಲ ಒಂದು ವಾರದ ಮೊದಲೇ ಸಿದ್ದವಾಗುತ್ತಿದ್ದರು ತಮ್ಮ ಭಕ್ತಿಯ ಪರಾಕಾಷ್ಟೆ ಮೆರೆಯಲು ...
ಬಲಿ ದಾನ ಮಾಡಲು ...ಹೇಗೂ ಅವನು ಮೊದಲೇ  ತೋರಿಸಿದ್ದ ದೇವರಿಗೂ ಮೂಕ ಪ್ರಾಣಿಗಳ ಮೇಲೆ ಪ್ರೀತಿ ಎಂದು ..
ನನಗೂ ನೋಡಬೇಕಿತ್ತು ಅವರ ಮೂಕ ಪ್ರಾಣಿಗಳ ಮೇಲಿನ ಪ್ರೀತಿಯ ... ತ್ಯಾಗ ಬಲಿದಾನಗಳ ...
ಇಂದೂ ಅದೇ ರಸ್ತೆಯಲ್ಲಿ ಹೊರಟಿದ್ದೆ .. ತ್ಯಾಗ ಬಲಿದಾನಗಳ ಗುರುತನ್ನು ಮೆಟ್ಟಿ ಕೊಳ್ಳುತ್ತಾ ...
ಮೂಕ ಪ್ರಾಣಿಗಳ ತ್ಯಾಗ ಬಲಿದಾನವನ್ನು ಹತ್ತಿರದಿಂದ  ನೋಡಬೇಕು .. ನೋಡಿ ಮೊದಲೇ ಸಿದ್ದಗೊಳ್ಳಬೇಕು..
ಆ ಕಾಲವೂ ಬರುತ್ತದೆ ... ಇಲ್ಲದಿದ್ದರೆ ನಮ್ಮ ಸಾವು ಕಣ್ಣೆದುರು ಬಂದಾಗ ಅರ್ಥವಾಗುತ್ತದೆ ... ಸಾವು ಏನೆಂದು ...
ಪಾಪ ಮೂಕ ಪ್ರಾಣಿ ಗಳಿಗೇನು ಗೊತ್ತು ತಾವೇ ಶಾಂತಿ ತ್ಯಾಗ ಬಲಿದಾನದ ಪ್ರತೀಕ ಎಂದು ...  
ಯಾವದೋ ಮಹಾತ್ಮನ ಹೆಸರಲ್ಲಿ  ಭೂರಮೆಯೂ ತನ್ನ ಕನ್ನೆತನವನ್ನು ಕಳೆದುಕೊಂಡು ಕೆಂಪಾಗಿತ್ತು...