Thursday, October 3, 2013



ಕೊನೆಗೂ ಹೆತ್ತ ನೆಲದಿಂದ ದೂರಾದದ್ದು 
ಗೊತ್ತಾಗಲೇ ಇಲ್ಲ ..
ಅಜ್ಜ ಮುತ್ತಜ್ಜ ಮಾಡಿ ಕೂಡಿಟ್ಟದ್ದು ..
ಉತ್ತಿ, ಬಿತ್ತಿ ಕಾಪಿಟ್ಟ ನೆಲವೀಗ 
ಯಾರೂ ಓಡಾಡದೆ ಹಸಿರಾಗಿದೆ ...
ಅಜ್ಜನಿಗೊಂದು ಚಟವಿತ್ತು ..ಹೋದ ದಾರಿಯಲ್ಲೇ 
ಕೂತು ಕಳೆ  ಕಿತ್ತು ಚೊಕ್ಕವಾಗಿಡುವುದು 
ತೋಟದಲ್ಲಿ ಕಳೆ ಇದ್ದರೆ  ಸತ್ವ  ಇರುವುದಿಲ್ಲ ..
ಕಾಲ ನಿಲ್ಲಬೇಕಲ್ಲ ..ಹೊಸ ಹೊಸ ಕ್ರಾಂತಿಗಳು 
ಮೊದಲೆಲ್ಲ ಕೃಷಿ ಆಗಿದ್ದು ಮಾಡುವವರಿಲ್ಲದೆ 
ಸಹಜ ಕೃಷಿ ಆಗಿದ್ದು ..
ಕೃಷಿ ಬಿಟ್ಟವ ಸಹಜ ಕೃಷಿಕ ..
ಬಿಟ್ಟು ಬಿಡಿ ಅವಷ್ಟಕ್ಕೆ ..ಸಹಜವಾಗಿ ಬೆಳೆಯಲಿ ..
ತೋಟವೆಂದರೆ ಕಳೆಯಿರಬೇಕು ,ಹಸಿರಿರಬೇಕು ..
ಕೃಷಿಯೇ ಗೊತ್ತಿರದ ಗಮಾರನಿಗೆ ನೋಡಿದ್ದೆಲ್ಲ ಚಂದ 
ಅರೆ ಅದೆಷ್ಟು ಹಸಿರಾಗಿದೆ ಎಂದು ಕಟ್ಟಿದ 
ಬಿಂಜಲು ಗಳನ್ನೆಲ್ಲ ಸರಿಸಿ ಓಡಾಡಿದ 
ಮೇಲೆ ಕುಳಿತ ಆಜ್ಜ ಮುತ್ತಜ್ಜರ ಕೂಗು ಅಲ್ಲಿಂದಲೇ ..
ಮಗನೆ ಬಿನ್ಜಲು ಕಟ್ಟುವುದು ಪಾಳು  ಬಿದ್ದ ಜಾಗದಲ್ಲಿ ..
ಸಹಜ ಕೃಷಿ ಯಲಲ್ಲ ..

Friday, July 19, 2013


ಕವಿತೆ ಬರೆಯಲಾಗುತ್ತಿಲ್ಲ .. ನನಗೆ 
ನನ್ನಲ್ಲಿ ಕವಿತೆಯಾಗಿ ಬಂದವಳೀಗ ಕವಿತೆ ಬರೆಯಲು ಬಿಡುತ್ತಿಲ್ಲ 
ಎಷ್ಟೆಲ್ಲ ಕನಸುಗಳಿದ್ದವು ..ಕನಸಾಗೆ ಉಳಿಯಬೇಕಿತ್ತು 
ನನ್ನೊಳಗಿನ ಕನಸಿನ ಲೋಕದಲ್ಲಿ ನೀನೊಬ್ಬಳೇ .. 
ನಿನಗಾಗೆ ಎಷ್ಟೆಲ್ಲ ಸಿಂಗರಿಸುತ್ತಿದ್ದೆ .. 
ಅಷ್ಟೆಲ್ಲ ಬಾವನೆಗಳ .. 
ಪ್ರತಿ ಕ್ಷಣವೂ ನೀ ಜೊತೆಗಿರುವಾಗ 
ನನಗಾಗೆ ಕಾದಿರುವ ನಿನ್ನ ವಿರಹ ಈಗಲ್ಲಿ ಒಂಟಿ ... 

ಸುಮ್ಮಗೊಂದು ಮುತ್ತ ಕೊಟ್ಟು ತುಂಟತನ 
ಮಾಡಿದವಳೀಗ ... ನಾ ಮರಳಿ ಕೊಡುವವರೆಗೂ ಬಿಡುವುದಿಲ್ಲ .. 
ಬೆಚ್ಚಗೆ ತಬ್ಬಿ ಉಸಿರು ಕಟ್ಟಿಸುವ ಆ ಕನಸಿನ ಲೋಕದ 
ಕಲ್ಪನೆಯೀಗ ಉಸಿರು ಬಿಡಲು ಕೊಡುತ್ತಿಲ್ಲ .. 

ಕವಿತೆ ಬರೆಯಲಾಗುತ್ತಿಲ್ಲ .. ನನಗೆ 
ಆಗೆಲ್ಲ ಕಲ್ಪನೆಗಳಿದ್ದವು ನನ್ನವಳ ಬಗೆಗೆ ..
ಮನಸಲ್ಲಿ ತುಂಬಿಕೊಂಡ ನೂರಾರು ಕನಸುಗಳಿದ್ದವು 
ಎಲ್ಲ ನನಸಾದರೆ ಮತ್ತೆಲ್ಲಿ ಕಲ್ಪನೆ ..?? 

Friday, March 29, 2013


ನಿಶ್ಚಯವಾಗಿದೆ ... ನನ್ನೊಳಗಿನ ಕನಸಿನ ಲೋಕಕ್ಕೆ ಕಾಲಿಡಲು
ಸುಮ್ಮನೆ ಒಳಗೆ ಬಂದು ಬಿಡು
ನನ್ನೆದೆಯ ಚಿತ್ತಾರಗಳನೆಲ್ಲ ಹರವಿದ್ದೇನೆ 
ಬರೆದುಬಿಡು ನಿನಗಿಷ್ಟವಾದ ಚಿತ್ರವನ್ನ .. 
ಒಂದಾಗಿಬಿಡಲಿ ನಮ್ಮಿಬ್ಬರ ಕನಸುಗಳು .. 
ಹೂಗಳ ಇಟ್ಟಿದ್ದೇನೆ .. ಅಲಂಕರಿಸಿಬಿಡು .. 
ನಿನಗಿಷ್ಟವಾದ ಬಣ್ಣಗಳ ಜೊತೆ .. 
ಏಳು ಬಣ್ಣಗಳೂ ಒಂದುಗೂಡಲಿ 
ನಮ್ಮಿಬ್ಬರ ಕನಸುಗಳಿಗೆ ... 
ನಿನಗಾಗೆ ಕಾದಿರುವ ಕನಸಿನ ಲೋಕವಿದು 
ಪ್ರವೇಶವಾಗಿಬಿಡಲಿ ನಿನ್ನ ಬಲಗಾಲಿಟ್ಟು .. 
ನನ್ನ ಕನಸಿನ ಲೋಕದೊಳಗೆ .. 
 ಪುಳಕಗೊಂಡುಬಿಡಲಿ  .. ನಿನ್ನ ಕಾಲ್ಗೆಜ್ಜೆ ಸದ್ದಿಗೆ
ನನ್ನೆಲ್ಲ ಕನಸುಗಳು ... 
ನಿನಗಾಗೆ ಕಾದಿರುವ ಕನಸುಗಳಿವು ..

Tuesday, March 5, 2013



ಬೆಚ್ಚಗೆ ತಬ್ಬಿ ತಲೆಯಿಟ್ಟು ಮಲಗಿದವಳು ಒಮ್ಮೆಲೇ ಕಣ್ಣ ನೋಡುತ್ತಾ ಕೇಳಿದ್ದೆ .. 
ಮುತ್ತು ಕೊಡು ... 
ಒಂದು ಕ್ಷಣ .... ಹಾಗೆ ಬಿಗಿದಪ್ಪಿ  ತುಟಿಗೆ ತುಟಿಯೊತ್ತಿದ್ದೆ .. 
ಅಲ್ಲೆಲ್ಲೋ ಕುಳಿತ ದುಂಬಿಗೂ ಎಚ್ಚರವಾಗಿತ್ತು .. 
ಏನಕ್ಕೋ ನೆನಪಾಗಿತ್ತು ನೀ ಕೊಟ್ಟ ನವಿಲುಗರಿ ..
 ಇನ್ನೂ ನನ್ನಲ್ಲೇ ಇತ್ತು .. 
ಆಗಲೂ ಹೀಗೆ ...ಬಿಗಿದಪ್ಪಿ ತುಟಿ ಕಚ್ಚಿದ್ದೆ 
ಈ ನವಿಲುಗರಿ ನಿನ್ನಲ್ಲೇ  ಇರಲಿ ..ನನ್ನ ಉಸಿರಿರುವವರೆಗೂ .. 
ಎಂದು ಕಣ್ಣಲ್ಲಿ ನೀರು ತುಂಬಿಸಿಕೊಂಡಿದ್ದೆ .. 
ಅವೆಲ್ಲ ಕನಸಾಗಲಿ ... ಮೆಲ್ಲಗೆ ಪಿಸುನುಡಿದಿದ್ದೆ 
ಇಂದೇಕೋ ಮತ್ತೆ ರಾಧೆ ನೆನಪಾಗುತ್ತಿದ್ದಾಳೆ ..
 ನಮ್ಮಿಬ್ಬರಲ್ಲೂ ಅದೇ ಭಾವವಿದೆಯಾ ... 
ಕೃಷ್ಣ ......   ರಾಧೆ .... 
ಅವರೂ ನಮ್ಮಿಬ್ಬರ ಹಾಗೆ ಅಲ್ಲೆಲ್ಲೋ ಕುಳಿತು ಕನಸು ಕಾಣುತ್ತಿದ್ದರಾ ??
ಸುಮ್ಮನೆ ಮುಂಗುರುಳ ಜೊತೆ ಆಟವಾಡುತ್ತಿದ್ದೆ .. 
ಏನಕ್ಕೋ ಕೆನ್ನೆ ಮೇಲಿನ ಮಚ್ಚೆ ಮುದ್ದಾಗಿ ಕಂಡಿತ್ತು .. 
ಮೆಲ್ಲಗೆ ಕಚ್ಚಿ ಪಿಸುನುಡಿದಿದ್ದೆ .. 
ಕೃಷ್ಣ ರಾಧೆಯರ ನೆನಪೇಕೆ ...??
ಸುಮ್ಮಗೆ ತಲೆಯಿಟ್ಟು ನನ್ನದೆ ಬಡಿತವ  ಕೇಳು.... 
ಅದೂ ಪಿಸುಗುಡುತ್ತಿದೆ ...  ನಾವಿಬ್ಬರೇ ಅವರೆಂದು ... 

Saturday, February 23, 2013

ಸಮಾಧಿ ಕಟ್ಟಿದ್ದೇನೆ ನನ್ನೊಳಗಿನ ಕನಸುಗಳಿಗೆಲ್ಲ 
ಮತ್ತೆಂದೂ ಜೀವ ಬಾರದಂತೆ 
ಸಮಾಧಿಯೋಳಗಿನ ಕನಸುಗಳೆಲ್ಲ ಅಸ್ತವ್ಯಸ್ತ ..
ಕೊಂದವರ್ಯಾರೋ ಗೊತ್ತಿಲ್ಲ ..
ಚೂರು ಜೀವ ಇರುವ ಕನಸುಗಳಿಗೂ ಉಸಿರು ಕಟ್ಟುವ ಶಿಕ್ಷೆ 
ಮತ್ತೆಂದೂ ಉಸಿರಾಡಬಾರದು ..
ಸುತ್ತ ಗಾಳಿಯೂ ನುಸುಳದಂತೆ 
ಅಮೃತಶಿಲೆಯ ಸಮಾಧಿ ಕಟ್ಟಿ ಬಿಟ್ಟಿದ್ದೇನೆ ..
ಆದರೂ ನನ್ನೊಳಗಿನ ಕನಸುಗಳೆಲ್ಲ ಸುಂದರವಲ್ಲವೆ ??..
ಸಮಾದಿಯ ಮೇಲೆ ಮೂರು ಗುಲಾಬಿಯಿರಲಿ ..
ಕೊಂದವರ್ಯಾರೋ  ಗೊತ್ತಿಲ್ಲ ..
ಕನಸು ಹುಟ್ಟಿದ ದಿನವಂತೂ ತಿಳಿದಿಲ್ಲ ..
ಅಳೆದುಳಿದ ಕನಸುಗಳ ಕೊಂದಿದ್ದಕ್ಕೆ  ಶಿಕ್ಷೆಯೇನೋ ??
ಸಮಾದಿ ಮೇಲೆ ಬರೆವ ಹೆಸರಿಗೊಂದು ಕಾಲಿ ಜಾಗವಿರಲಷ್ಟೇ 
ಸದ್ಯ ಕನಸುಗಳ ಆತ್ಮಕ್ಕೊಂದು ಶಾಂತಿಯಿರಲಿ