Thursday, October 14, 2010



ನನ್ನ ಮನದಲ್ಲಿ ಮೈಯ ಕಣ ಕಣದಲ್ಲಿ ತುಂಬಿ ಬರುತಿದೆ 
ಈ ನಿನ್ನ ಸುಂದರ  ರೂಪ
ಬೀಸೋ ತಂಗಾಳಿಯಲಿ ,ಚಿಮ್ಮಿ ಹರಿಯುವ ನೀರಿನಲಿ 
ತೇಲಿ ಬರುತಿದೆ ನಿನ್ನ ಸವಿ ನೆನಪು .
ಹುಣ್ಣಿಮೆಯ ಬೆಳದಿಂಗಳಲಿ ಮಂಜಿನ ಹನಿಗಳಲಿ 
ಈ ಸುತ್ತ ಪರಿಸರದಿ ನೀನೇ ನೀನು ....
ನಿದ್ದೆಯಾ ಸವಿಗನಸಿನಲಿ ನೀನು ಬಂದೆ 
ಈ ಹೃದಯ ತರಂಗಗಳನು ಮೀಟಿ ನಿಂತೆ..
ಆ ಕಣ್ಣ ನೋಟದಲಿ ಮನಸೆಳೆದೆ ನನ್ನ
ಈ ಹೃದಯ ಪ್ರೀತಿಸಿತು ಅರಿವಿಲ್ಲದೆ ನಿನ್ನ 
ನನಗರಿವಿಲ್ಲದೆ ನಿನ್ನ ಪ್ರೀತಿಸಿದೆ 
ನಿನಗಾಗಿ ನನ್ನೀ ಹೃದಯವನು ಮುಡುಪಾಗಿಟ್ಟೆ.
ನಿನ್ನ ಪ್ರೀತಿಯೇ ಶಾಶ್ವತವಾದರೆ, ಆಹಾ ಅದೆಷ್ಟು ಸುಂದರ ..!
ನಿನ್ನ ಪ್ರೀತಿಯೊಳು ನಾ ಹುಚ್ಚನಾದಾಗ ,
ನನ್ನ ನೋಡಿ ನಗುತ ನೀ ದೂರ ಹೋದೆ ..
ನಿನ್ನ ಹುಡುಕುತ ಕನವರಿಸಿ ನಡೆದಾಗ ,
ಕ್ಷಣದೊಳಗೆ ಮಾಯವಾದೆ ಈ ಕಣ್ಣಿನಿಂದ 
ನಿನ್ನ ಕಾಣದೆ ನಾ ಪರಿತಪಿಸುತಿರುವಾಗ 
ಸದ್ದಿಲ್ಲದೆ ಬಂದೆ ಕನಸಿನಲಿ ನನ್ನ 
ನೀನೆನಗೆ ಚೈತನ್ಯ, ನಿನ್ನ ಹೊರತೆಲ್ಲ ಶೂನ್ಯ 
ಈ ನಿನ್ನ ಪ್ರೀತಿಯಲೇ ಇರುವುದೆನ್ನ ಜೀವನ ..... !        
   

10 comments:

  1. ಕವನ ಚೆನ್ನಾಗಿದೆ.
    ಆದರೆ ನೀವು
    ಗದ್ಯವನ್ನು ಹೆಚ್ಚು ಚೆನ್ನಾಗಿ ಬರೀತೀರಾ ಅಂತ ನನ್ನ ಭಾವನೆ..

    ಬರೀತಿರಿ..ಸಾರ್.

    ReplyDelete
  2. ನೀನೆನಗೆ ಚೈತನ್ಯ, ನಿನ್ನ ಹೊರತೆಲ್ಲ ಶೂನ್ಯ
    ಈ ನಿನ್ನ ಪ್ರೀತಿಯಲೇ ಇರುವುದೆನ್ನ ಜೀವನ ..... !
    pritiya amaratva saaruva kavana. chennagide.

    ReplyDelete
  3. ಸಾಲುಗಳ ಜೋಡಣೆ ಇಷ್ಟವಾಯಿತು

    ReplyDelete
  4. Thanks venkatakrishna sir. pabhamani madam.& gurumurti sir,

    VKK sir every prose am writing here is only my feelings, and inspirations.whatever my innerheart says i give it touch through writing . thanks for the comments

    ReplyDelete
  5. ಚಂದದ ಕವನ ವೆಂಕಟೀಶಣ್ಣ .. ಚಿತ್ರ ಇನ್ನು ಸ್ವಲ್ಪ ಸ್ಪಸ್ಟ ವಾಗಿದ್ದಿದ್ದರೆ ಚೆನ್ನಾಗಿರ್ತ ಇತ್ತು:)

    ReplyDelete
  6. ಚೆಂದದ ಕವನ
    ಕೊನೆಯೆರಡು ಸಾಲುಗಳು ಮನಸೆಳೆಯಿತು.

    ReplyDelete
  7. ವಕೀಲ್ರೆ, ಅಂತೂ ಇಂತೂ ಪ್ರೀತಿ ಮಾಡಿ ಕನಸ ಕಂಡ್ರಾ? ಸ್ವಲ್ಪ ಹೊರ ಜಗತ್ತಿನ ಬಗ್ಗೂ ಬರೀರಿ, ಶುಭಾಶಯಗಳು

    ReplyDelete
  8. ಸೀತಾರಾಮ್ ಸರ್ ,ವಿ ಆರ್ ಭಟ್ರೇ ,& ರಂಜಿತ ಧನ್ಯವಾದಗಳು . ಭಟ್ರೆ ಏನ್ ಮಾಡೋದು ನಮಗೆ ಯಾವುದು ಆಗುವುದಿಲ್ಲವೋ ಅದನ್ನು ಹೇಳಿಕೊಳ್ಳೋದು ಅಷ್ಟೇ . ಟ್ರೈ ಮಾಡ್ತಾ ಇದ್ದೇನೆ ಭಟ್ರೆ ಆದರೆ ಎಲ್ಲರೂ ಅದನ್ನೇ ಬರೆದರೆ ಇದನ್ನ ಬರೆಯುವವರು ಯಾರು ಅಲ್ಲವ?

    ReplyDelete