Saturday, December 25, 2010

ಮನದೊಳಗಿನ ನೂರು ಮಾತು ಕಣ್ಣಂಚಿನಲಿ
 ಬರುವ ಸಮಯ ..
ಕಾಯುತ್ತಿತ್ತು ಈ ಮನಸು ನೂರಾರು ಕನಸುಗಳೊಟ್ಟಿಗೆ  ..
ಬೆಚ್ಚಗೆ ಕುಳಿತು ಪಿಸುನುಡಿಯುವ ಕಾತರದ ಕ್ಷಣಗಳಿಗೆ ..
ಬರೀ ಮೌನಗಳೊಟ್ಟಿಗೆ ಸರಿಯುತ್ತಿದ್ದವು ..ಕಾತರದ 
ಕ್ಷಣಗಳೆಲ್ಲ ... ಸಂಕೋಚದ ಪರದೆ ಹಾಕಿ ..
ಹೃದಯದಲಿ ಬಚ್ಚಿಟ್ಟು ಕೊಂಡಿರುವ  ಬಾವನೆಗಳೆಲ್ಲ 
ಕೆಣಕುತ್ತಿದ್ದವು...ಹುಚ್ಚಾ ಕಲಿಸಬಾರದೆ , ಮೌನಗಳಿಗೆಲ್ಲ ..ಮಾತನ್ನ ..??.
ಮಾತು ಕಲಿಸುವ ಪ್ರಯತ್ನದಲಿ ತೊದಲು ನುಡಿಯಲಾಗದೆ...
ಮತ್ತೆ ಮೌನಕ್ಕೆ ಶರಣಾಗಿದ್ದೆ ....
ಕಾಯುತ್ತಿದ್ದೇನೆ ಮಾತು ಕಲಿಯುವ ಕ್ಷಣಗಳಿಗಾಗಿ ..
ಕನಸು ಸಾಕಾರಗೊಳ್ಳಲು ಬೇಕಿನ್ನೂ ಸಮಯ....
ಅಲ್ಲಿಯವರೆಗೆ ಕಾಯಬೇಕು ಹೀಗೆ .. ಮೌನಿಯಾಗಿ ...          

1 comment:

  1. ಮೌನಿಯಾದರೆ ಬರುವುದೇ ಹೃದಯದಾ ಮಾತು..
    ಒಳಗೆ ಕುಳಿತ ಪಿಸುನುಡಿಗಳಿಗೆ ಅರ್ಥವಾಗುವದೆಂತು..?
    ಕನಸು ಸಾಕಾರಗೊಳ್ಳಲು ಕಾಯಬೇಕಾಗಿಲ್ಲ ಒಂದಿನಿತು..
    ಸಂಕೋಚದ ಪರದೆ ಸಡಿಲಿಸಿ ಹರಿಯಬಿಡಲೆಂತು..??

    ReplyDelete