Saturday, March 26, 2011


ಏಕೆ ಕಾಡುವೆ ಹೀಗೆ ಮನದ ಸುತ್ತ ..
ಬಚ್ಚಿಟ್ಟು ಸಮಾಧಿ ಮಾಡಿದ ಬಾವನೆಗಳೆಲ್ಲ 
ಮತ್ತೇಕೆ ಕೆದಕುವೆ ?
ಎಲ್ಲ ನೆನಪುಗಳ ಮುಚ್ಚಿಟ್ಟು...
ನಾ ಒಂಟಿಯಾಗಿರಲು ಬಯಸುವಾಗ ..
ಮತ್ತೇಕೆ ನೆನಪಿಸುವೆ ಕಳೆದ ಆ ಕ್ಷಣಗಳೆಲ್ಲ ...
ಹೌದು ... ನಿನ್ನ ನಗುವಿಗೆ ಅರ್ಥ ಕೊಡಲು ಹೋದೆನಲ್ಲ 
ಅದು ನನ್ನ ತಪ್ಪೇ ....???
ಆದರೆ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ 
ನಾ ಏನ ಹೇಳಲಿ 
ಕಳೆದ ಮುಸ್ಸಂಜೆ ... ಕಳೆದ ಸಮಯ .. ಆಡಿದ ಪಿಸುಮಾತುಗಳಿಗೆಲ್ಲ
ಅರ್ಥ ಕೊಡಲಿಲ್ಲವೇಕೆ...?
ಮನದ  ದುಗುಡಗಳೆಲ್ಲ ಮುಚ್ಚಿಟ್ಟು...ಮನದ ಭಾವನೆಗಳೆಲ್ಲ 
ತೆರೆದಿಟ್ಟ ಆ ಕ್ಷಣಗಳಿಗೆ ... ಅರ್ಥ ಕೊಡಲಿಲ್ಲವೇಕೆ ...
ಪ್ರೀತಿ ಬರೀ ನಿರರ್ಥಕವೆಂದೆ ...????

Tuesday, March 15, 2011

ಈ ಪ್ರೀತಿ ಎನ್ನುವುದು .. ಕೆಂಪು ತುಟಿ ಬಿರಿದು 
ಹೂ ನಗೆ ಎಸೆದು ,ಕಣ್ಣು ಮಿಟುಕಿಸಿ ಕೆಣಕುವಾಗ
ಎದೆಯಲ್ಲೇನೋ  ಕಂಪನದ ಅಲೆ ..
ಈ ಪ್ರೀತಿ ಎನ್ನುವುದು ಕಂಡ ಕೂಡಲೇ ಪುಳಕಿಸಿ
  ಮಾತನಾಡಲು ತವಕಿಸಿ , ಎದುರಿಗೆ ಹೋದಾಗ 
ಸಣ್ಣಗೆ ನಡುಗಿಸಿ ಸಾಧ್ಯವಾಗದೆ ಮತ್ತೆ ಬರುವ ...
ಈ ಪ್ರೀತಿ ಎನ್ನುವುದು ಕಣ್ಣ ನೋಟ ಕೂಡಲು..
ಹೃದಯ ಮಾತನಾಡಲು ,ಬಾವನೆಗಳೇ ಉಕ್ಕೇರಿ ಬರುವ 
ಸಾಗರದ ಅಲೆ ...
ಈ ಪ್ರೀತಿ ಎನ್ನುವುದು ಹೃದಯದಲಿ ಬಚ್ಚಿಟ್ಟುಕೊಂಡ ಯಾತನೆ ... 
ಮೇಲೆ ಕಾಣುವುದು ಎಲ್ಲೆಡೆ ಹಸಿರ ಎಲೆ 
ಆದರೆ ಒಳಗೆ ಮಾತ್ರ ತಲ್ಲಣದಾ  ಮಳೆ ...
  

Saturday, March 12, 2011






ಪ್ರಿಯೇ ಇನ್ನೂ ಏಕೆ ಈ ನಾಟಕ ?

ಬೇಕಲ್ಲವೇ ನಿನಗೆ ನನ್ನ ಜಾತಕ ..

ಅದಕ್ಕೇಕೆ ನಾಚಿಕೆ ,

ಹೇಳಬಾರದಿತ್ತೆ ಮನದ ಆಸೆಯ ?

ಕಣ್ಣ ನೋಟದಲ್ಲಿಯೇ ತಿಳಿಸಿದೆ ನನ್ನ ಆಸೆಯ 

ಮೂರು ಗುಲಾಬಿಯ ಮೂಲಕ ಕಳುಹಿಸಿದೆ 


ನನ್ನ ಬಾವನೆಗಳ .....

ಆದರೇನು ..

ನಮ್ಮಿಬ್ಬರ ಮನಸುಗಳೆರಡು ಕೂಡಲು

ನಮಗೇಕೆ ಜಾತಕ ?

ಆದರೂ ನನಗಾಗಿ ಕಾದಿಡು ನಿನ್ನ ಜಾತಕ...  

Tuesday, March 8, 2011



ಯಾರಿಗೂ ಗೊತ್ತಾಗದೆ ಬಂದವಳು
ತಾನೆಂದು ಅಂದುಕೊಂದಿದ್ದಳವಳು !
ಅವಳು ಹೃದಯದ ಬಾಗಿಲ ಕಡೆ
ಹೆಜ್ಜೆ ಇಟ್ಟಾಗಲೇ ಬೋರ್ಗರೆದಿತ್ತು ಮನ
ಹುಣ್ಣಿಮೆಯ ರಾತ್ರಿಯ ಕಡಲಿನಂತೆ....

ಕದ್ದೊಯ್ಯಲಿ ಸರ್ವಸ್ವವನ್ನು ಎಂದು
ಸುಮ್ಮನೆ ಕುಳಿತಿದ್ದೆ.........
ಮಾರಕಾಸ್ತ್ರಗಳಿಲ್ಲದೆ, ರಕ್ತಪಾತವಿಲ್ಲದೇ
ಕೇವಲ ಕುಡಿ ನೋಟದಿಂದಲೇ ಇರಿದು
ಎಲ್ಲವನ್ನೂ ಬಾಚಿ ಕಟ್ಟಿಕೊಂಡಳವಳು
ಒಂದಿನಿತೂ ನನಗೆ ಉಳಿಸದೆ !

ಅನುಕಂಪವೋ ಅನುರಾಗವೋ ಕಾಣೆ
ಬಿಟ್ಟು ಹೋಗಿದ್ದಳವಳು ತನ್ನ ಹೃದಯವನ್ನೇ
ಇಲ್ಲೇ ನನ್ನ ಒಳಗೆ ..........
ಕಳ್ಳತನವೂ ಇಷ್ಟೊಂದು ಸಿಹಿಯೇ ??

(ಸ್ನೇಹಿತ ಅಶೋಕ್ ಭಾಗಮಂಡಲ ಬರೆದದ್ದು ...)

Sunday, February 27, 2011


ನೆನಪೇ ಘಾಸಿಗೊಳಿಸದಿರು.. ಈ ಮನವನ್ನ 
ಮತ್ತೆ ಮತ್ತೆ ಬಂದು ...
ನಿನ್ನ ಮರೆಯಲೇ ಓಡುತ್ತಿರುವುದು ಬಲುದೂರ 
ಹೊಸ ಕನಸು ಹೊಸ ಆಕಾಂಕ್ಷೆ ಗಳೊಡನೆ ... 
ಆದರೂ ಮತ್ತೆ ಬಂದು ನೋಯಿಸದಿರು ,
ತಾಳಿಕೊಳ್ಳದು ಈ ಹೃದಯ ....
ಮತ್ತೆ ಮತ್ತೆ ಬರುವ ನಿನ್ನ ನೆಪುಗಳ 
ಸಾವಿರ ಹೋಳಾಗುವುದು ಖಚಿತ ..
ಏನು ಮಾಡಲಿ ಆ ಸಾವಿರ ಚೂರುಗಳು ....
ಸಾವಿರ ನೆನಪುಗಳಾಗಿ ಕಾಡಿಸಿದರೆ..???
ಎಲ್ಲಿ ಹೋಗಲಿ ನಿನ್ನಿಂದ ತಪ್ಪಿಸಿಕೊಂಡು..
ಹಕ್ಕಿಯಾಗಿ ಹಾರಿ ಹೋಗೋಣವೆಂದರೆ ,,, ಬಿರುಗಾಳಿಯಾಗಿ 
ಬಂದು ದಿಕ್ಕು ತಪ್ಪಿಸುವೆ ....
ಭೋರ್ಗರೆಯುವ ನೀರಾಗಿ ಹರಿದು ಬಿಡಲೆಂದರೆ 
ಹೆಬ್ಬಂಡೆಯಾಗಿ ತಡೆಯುವೆ ...   
ಕತ್ತಲಲಿ ಕಣ್ಣು ತಪ್ಪಿಸಿ ಹೋಗೋಣವೆಂದರೆ  
ಬೆಳದಿಂಗಳ ನೆರಳಿನಂತೆ  ಹಿಂಬಾಲಿಸುವೆ...
ಎಲ್ಲಿ ಹೋದರು ಬೆಂಬಿಡದೆ ಬರುವೆ ....ನೆರಳಾಗಿ ...
ಏಕೆಂದರೆ ನೀನು ನೆನಪಲ್ಲವೇ ?            

Saturday, February 19, 2011


ಅವಳ ಕನಸು  ಬೆತ್ತಲಾಗುವ ಮುನ್ನ ಮನಸ ಆವರಿಸಿಕೊಳ್ಳಲಿ 
ಮೋಡದಂತೆ ಮೇಲೇರಿ ಬರಲಿ ,
ಎಷ್ಟೋ ವರ್ಷಗಳಿಂದ ಕಾದು, ಕಾಯ್ದ  ಕನ್ನೆ ನೆಲ 
ಇಂದು ಉತ್ತುಬಿಡಲಿ, 
ಪ್ರವಾಹದಂತೆ ನುಗ್ಗಿ ಬರಲಿ ,ಕಡಿದು ಉರುಳಿಸಿ ,ಕೆನೆದು ಕುಪ್ಪಳಿಸಿ  
ಭೋರ್ಘರೆದು,ನನ್ನಲ್ಲಿ ಮಳೆಯಾಗಿ ಹರಿಯಲಿ ....
ಅದರಲ್ಲಿ ನಾನು ತೇಲಿ ಹೋಗಬೇಕು ..  

Saturday, January 15, 2011

ಶಾಶ್ವತ



ನೀನಂದು ನಡೆಯುತ್ತಿದ್ದೆ ಸಮುದ್ರ ತೀರದ
ಹೊನ್ನ ಮರದ ಕಣದ ಮೇಲೆ
ನನ್ನ ಹೆಜ್ಜೆಯ ಮೇಲೆನಿನ್ನ ಹೆಜ್ಜೆಯನಿಟ್ಟು
ಏಕೆಂದು ಕೇಳಿದಾಗ ನೀ ಹೇಳಿದ್ದೆ
ನಿನ್ನ ಜೊತೆ ನಾ ಶಾಶ್ವತ ವಾಗಿರಲೆಂದು ,,
ನಾ ವೆದಾಂತಿಯಾಗಿದ್ದೆ...
ಈ ಜೀವನ ನಶ್ವರ ,
ಯಾರಿಗೆ ಯಾರೂ ಶಾಶ್ವತವಲ್ಲ .
ಇಂದು ನೀ ಪಕ್ಕ ನಡೆಯುತ್ತಿದ್ದೆ ಅದೇ
ಹೊನ್ನ ಮರಳ ಕಣದ ಮೇಲೆ
ನಾ ನಿನ್ನ ಮುಖ ನೋಡಿದಾಗ
ನಕ್ಕು ನೀ ಹೇಳಿದ್ದೆ ...ವೆದಾಂತೀ,
ನೀನಲ್ಲದಿದ್ದರೆ ನಾನಾದರೂ ಶಾಶ್ವತ ವಾಗಿರಲೆಂದು
ಮರುಕ್ಷಣವೇ ದೊಡ್ಡ ತೆರೆಯೊಂದು ನಮ್ಮಿಬ್ಬರ
ಹೆಜ್ಜೆ ಗುರುತುಗಳನ್ನು ಅಳಿಸಿಬಿಟ್ಟಿತ್ತು..
ಕೊಪಗೊಂಡಿತ್ತು ಪ್ರಕೃತಿ ....
ನಾನಿದ್ದರೆ ತಾನೆ ?ನೀವೆಲ್ಲ ಶಾಶ್ವತ ....
!