Monday, November 7, 2011



ಅದಾರೋ ಪವಾಡ ಪುರುಷ ತನ್ನ ಭಕ್ತಿಯ ಪರಾಕಾಷ್ಟೆ ಮೆರೆದ ನಾಲ್ಕು ಸಾವಿರ 
ವರ್ಷದ ಹಿಂದೆ , ಭಗವಂತನಿಗೆ ಪ್ರೀತಿಯ ಧಾರೆಯೆರೆಯಲು ಹೋಗಿ ತನ್ನ 
ಮಗನನ್ನು ಬಲಿಕೊಟ್ಟ ...  ಭಗವಂತನೂ ದಯಾಮಯಿಯೇ ... ಭಕ್ತನ ಪರೀಕ್ಷಿಸಬೇಕಲ್ಲ ..
ಅಗ್ಗಾಗ್ಗೆ ಅವನಿಗೂ ಪರೀಕ್ಷೆ ಮಾಡುವ ಮನಸ್ಸಾಗುತ್ತದೆ ...  
ಅಂದೇ ತನ್ನ ಭಕ್ತನ ಭಕ್ತಿಗೆ ಮೆಚ್ಚಿಅವನ ಮಗನ ಬದಲು  ಮೂಕ ಪ್ರಾಣಿಯ ಬಲಿ ತೆಗೆದ ...
ಅದೇ ಧರ್ಮ ,ಶಾಂತಿ ,ತ್ಯಾಗ ಬಲಿದಾನ , ಎಂದು ಹೆಸರೂ ಕೊಟ್ಟ ...
ಅಲ್ಲಿಂದ ಶುರುವಾಯಿತು ,,.. ಭಕ್ತಿಯ ಪರಾಕಾಷ್ಟೆ ... ಅವನಿಗೆ ದೇವರ ಪಟ್ಟ ಕಟ್ಟಿ...
ಅವನೋ ಏನೋ ತೋರಿಸಿಕೊಳ್ಳಲು ಹೋಗಿ ..ಮತ್ತೇನನ್ನೋ ತೋರಿಸಿ ಸತ್ತ ...
ಇವರಿಗೋ ಕಾರಣಗಳು ಬೇಕು ... ಅವರಲ್ಲೊಬ್ಬ ನಾವೇ ಶ್ರೇಷ್ಠ ,..ನಮ್ಮ ದೇವರೇ ಸತ್ಯ ಎಂದು ಯುದ್ದ ಮಾಡಿದ ..
 ಸೇರದವರನ್ನ ಕಾಫೀರರುಗಳು ಎಂದು ಕೊಂದ... ಆ ಪ್ರಾಣಿಯ ?? ಅವರು ಪೂಜಿಸುವರ ?? ಹಾಗಿದ್ದರೆ 
ಅದು ನಮ್ಮ ದೇವರಿಗೆ ಶ್ರೇಷ್ಠ ಎಂದ ,,.ಅದನ್ನೇ ಶತಮಾನಗಳಿಂದ ಮುಂದುವರೆಸಿಕೊಂಡು ಬಂದ...
ಪಾಪ ಮೂಕ ಪ್ರಾಣಿಗೆನು ಗೊತ್ತಿತ್ತು ,ತಾನೇ ಬಲಿ ಎಂದು ... ಅದಾರೋ ವರ್ಷಕೊಮ್ಮೆ ಸಿಂಗರಿಸಿ  ಪೂಜಿಸುತ್ತರಲ್ಲ 
ಕಾಯಿ ಕಡುಬು , ಕಜ್ಜಾಯಗಳ ಮಾಡಿ ತಿನ್ನಿಸುತ್ತಾರಲ್ಲ... ಅವರಂತೆ  ಇವರು ಎಂದು ತಿಳಿದಿತ್ತೋ ಏನೋ ..
ನಾನೂ ಸುಮಾರು ದಿನಗಳಿಂದ ನೋಡುತ್ತಿದ್ದೆ  ನಾ ಬರುವ ದಾರಿಯಲ್ಲಿ ಸಿಂಗರಿಸಿ ನಿಂತ ಆ ಮೂಕ ಪ್ರಾಣಿಗಳ ...
ನನಗಂತೂ ಗೊತ್ತಿತ್ತು .. ಕುರಿ ಕೊಬ್ಬಿದಷ್ಟೂ ಕಟುಕನ ಹೊಟ್ಟೆ ತುಂಬುತ್ತೆ ಅಂತ ... 
ಆದರೆ ಆ ಮೂಕ ಪ್ರಾಣಿಯ ಹೊಟ್ಟೆಗೆ ಮಾತ್ರ ಹಿಡಿ ಹುಲ್ಲು , ಮಳೆ ಬಂದರೆ ಮೇಲೊಂದು ಶೀಟು ಅಷ್ಟೇ ...
ಇವರೆಲ್ಲ ಒಂದು ವಾರದ ಮೊದಲೇ ಸಿದ್ದವಾಗುತ್ತಿದ್ದರು ತಮ್ಮ ಭಕ್ತಿಯ ಪರಾಕಾಷ್ಟೆ ಮೆರೆಯಲು ...
ಬಲಿ ದಾನ ಮಾಡಲು ...ಹೇಗೂ ಅವನು ಮೊದಲೇ  ತೋರಿಸಿದ್ದ ದೇವರಿಗೂ ಮೂಕ ಪ್ರಾಣಿಗಳ ಮೇಲೆ ಪ್ರೀತಿ ಎಂದು ..
ನನಗೂ ನೋಡಬೇಕಿತ್ತು ಅವರ ಮೂಕ ಪ್ರಾಣಿಗಳ ಮೇಲಿನ ಪ್ರೀತಿಯ ... ತ್ಯಾಗ ಬಲಿದಾನಗಳ ...
ಇಂದೂ ಅದೇ ರಸ್ತೆಯಲ್ಲಿ ಹೊರಟಿದ್ದೆ .. ತ್ಯಾಗ ಬಲಿದಾನಗಳ ಗುರುತನ್ನು ಮೆಟ್ಟಿ ಕೊಳ್ಳುತ್ತಾ ...
ಮೂಕ ಪ್ರಾಣಿಗಳ ತ್ಯಾಗ ಬಲಿದಾನವನ್ನು ಹತ್ತಿರದಿಂದ  ನೋಡಬೇಕು .. ನೋಡಿ ಮೊದಲೇ ಸಿದ್ದಗೊಳ್ಳಬೇಕು..
ಆ ಕಾಲವೂ ಬರುತ್ತದೆ ... ಇಲ್ಲದಿದ್ದರೆ ನಮ್ಮ ಸಾವು ಕಣ್ಣೆದುರು ಬಂದಾಗ ಅರ್ಥವಾಗುತ್ತದೆ ... ಸಾವು ಏನೆಂದು ...
ಪಾಪ ಮೂಕ ಪ್ರಾಣಿ ಗಳಿಗೇನು ಗೊತ್ತು ತಾವೇ ಶಾಂತಿ ತ್ಯಾಗ ಬಲಿದಾನದ ಪ್ರತೀಕ ಎಂದು ...  
ಯಾವದೋ ಮಹಾತ್ಮನ ಹೆಸರಲ್ಲಿ  ಭೂರಮೆಯೂ ತನ್ನ ಕನ್ನೆತನವನ್ನು ಕಳೆದುಕೊಂಡು ಕೆಂಪಾಗಿತ್ತು... 

Friday, August 12, 2011



ಅವಳನ್ನೆಲ್ಲೋ ನೋಡಿದ ಹಾಗೆ ಕಾಣುತ್ತದಲ್ಲ ..
ನಮ್ಮ ಜಾತಿಯವಳ ?ಇರಬೇಕು
.ಅದೇ ಮುಖ , ಮೂಗು,ಅವಳಾರೋ ಬರುತ್ತಿದ್ದಳಲ್ಲ
ಅವಳ ತಂಗಿಯಾ??? ..ಪರವಾಗಿಲ್ಲ ಚೆನ್ನಾಗಿದ್ದಾಳೆ ..
ಆ ತುಟಿ ಎಷ್ಟು ಎಳಸಾಗಿದೆ .. ಮೂಗೂ ಅಷ್ಟೇ ..
ನಮಗೆ ಹುಟ್ಟುವ ಮಗು ಹೇಗಿರಬಹುದು ? ..
ತುಟಿ ಮತ್ತು ಮೂಗು ಅವಳ ಹಾಗಿರಬಹುದ?
ಮುಖ ನನ್ನ ಹಾಗಿರಬಹುದ?...
ಛೆ... ಈ ಹಾಳು ಮನಸಿಗೆನಾಗಿದೆ ಇನ್ನು ಮದುವೆಯೇ ಆಗಿಲ್ಲ
ಮಕ್ಕಳ ಬಗ್ಗೆ ಯೋಚಿಸುತ್ತಿದೆಯಲ್ಲ...ಅದೂ ಅವಳು ಯಾರೋ ...
ಹಾಳು ಮಾಗಡಿ ರಸ್ತೆಯ ನೋಡು ,,,ಎಷ್ಟೊಂದು ಹೊಂಡ, ತಗ್ಗುಗಳು ..
ಈ ಮೆಟ್ರೋ ಆದರೂ ಯಾವಾಗ ಮುಗಿಯುತ್ತದೋ ...
ಕಂಡ ಕಂಡಲ್ಲಿ ಅಂಟಿಸಿರುವ ಸಿನಿಮಾ ಪೋಸ್ಟರು ಗಳು ...
ಹರೇ ರಾಮ ಹರೇ ಕೃಷ್ಣ ...ಛೆ ಇವ ಯಾರು ... ಪಕ್ಕ ಬಂದು ಕುಳಿತವ ..
ಅದೂ ಅವಳು ಕಾಣದಂತೆ ಅಡ್ಡ ಕೈಯನಿಟ್ಟು.. ಆ ಕೈಯ ಕಿತ್ತು ಬಿಸಾಕಲ ??
ಅದೆನಿದು ಆ ತರಾ ತಿರುಗಿ ನೋಡುತ್ತಿದ್ದಾಳೆ ..ನನ್ನನ್ನ ..ಅಲ್ಲಲ್ಲ ..
ಛೆ ,,, ಇನ್ನು ಎಷ್ಟು ಹೊತ್ತೋ ... ಸುಮ್ಮನೆ ಸುತ್ತು ಹಾಕುತ್ತಿದ್ದಾನೆ ..
ಪರವಾಗಿಲ್ಲ ತೆಳ್ಳಗೆ ,ಬೆಳ್ಳಗೆ ಇದ್ದಾಳೆ .. ನನಗೆ ಚೆನ್ನಾದ ಜೋಡಿ ..
ಕೇಳಿ ಬಿಡಲಾ .. ನಿನ್ನ ಊರು ಯಾವುದೆಂದು ..ಬೇಡ ...ಯಾವುದಾದರೇನು ?
ಅದೇನದು ಕಿಡ್ಸ್ ಕೇರ್ ..ದೊಡ್ಡ ಬೋರ್ಡನ್ನು ನೇತುಹಾಕಿದ್ದರಲ್ಲ..
ಥೂ ಇವತ್ತೇನಾಗಿದೆ ಈ ಹಾಳು ಮನಸ್ಸಿಗೆ ...ಬರೀ ಏನೇನೋ ಯೋಚಿಸುತ್ತದಲ್ಲ ..
ಅರೆ ಅವಳದು ನನ್ನ ಹಾಗೆ ಟಚ್ ಸ್ಕ್ರೀನ್ ಮೊಬೈಲ್ ... ಅರೆ ನನ್ನ ತರವೇ
ಸೀಟು ಸಿಕ್ಕಿದಾಗಲೇ ಎಫ್ ಎಮ್ ಕಿವಿಗೆ ಹಾಕಿ ಕೊಳ್ಳುವುದು..ಕಿಟಕಿ ಪಕ್ಕದ ಸೀಟಲ್ಲಿ ಕುಳಿತು ಏನೋ ಯೋಚನೆ ..
ಒಳ್ಳೆ ಜೋಡಿಯಾಗಬಹುದ ?? ..
ಈ ಬಸ್ಸಿನವನು ಎಲ್ಲೆಲ್ಲಿ ಹೋಗುತ್ತಿದ್ದಾನೆ ಇಂದು ... ಈ ದಾರಿಯಲ್ಲಿ ಹೇಗೆ ಭಾಷ್ಯಂ ಸರ್ಕಲ್ ಗೆ ಬಂದ ??
ಅವಳು ಎಲ್ಲಿ ಇಳಿಯಬಹುದು ?? ನನ್ನ ನೋಡಿದಳಾ ? ಇರಬಹುದು ...
ಅರೆ ಅವಳು ಇಳಿಯುವುದೂ ನವರಂಗಿನಲ್ಲ... ಇಷ್ಟು ದಿನ ನೋಡಲೇ ಇಲ್ಲವಲ್ಲ ..
ಛೆ ಇವಳೇಕೆ ಇಷ್ಟು ಜೋರಾಗಿ ನಡೆಯುತ್ತಿದ್ದಾಳೆ ...ಇಲ್ಲೆ ಎಲ್ಲಾದರೂ ಪಿಜಿ ಯಲ್ಲಿ ಇರಬಹುದಾ?
ಅರೆ ಇವಳೂ ಇಲ್ಲೆ ನಿಂತಳಲ್ಲ ... ನಾನು ಹೋಗುವಲ್ಲೇ ಇವಳೂ ಹೋಗುವಳಾ..
ಎಲ್ಲವಳು ... ಬಸ್ಸಿನಲ್ಲೆಲ್ಲು ಕಾಣುತ್ತಿಲ್ಲವಲ್ಲ ...ಅಲ್ಲೇ ಉಳಿದಳಾ..ಹಾಗಿದ್ದರೆ ಎಲ್ಲಿ ???
ಮತ್ತೂ ಮುಂದೆ ಹೋಗುವಳಾ...
ಛೆ ನನಗೇನಾಗಿದೆ ಇಂದು ...ಸುಮ್ಮನೆ ಏನೇನೋ ಯೋಚಿಸುತ್ತಿದ್ದೆನಲ್ಲ ...
ಅರೆ ಅವಳಾರು ನನ್ನ ಹಾಗೆ ಸ್ಪೆಕ್ಟ್ ಹಾಕಿದ್ದಳಲ್ಲ ... ಪರವಾಗಿಲ್ಲ ಚೆನ್ನಾಗೂ ಇದ್ದಾಳೆ ..
ಜೋಡಿಯಾಗಬಹುದಾ..................​...........
..............................​..................
........................................................

Tuesday, August 2, 2011



ಜುಳು ಜುಳು ಹರಿವ ನೀರ ಮೇಲೆ ತೇಲಿ ಹೋದ 
ಬಂಗಾರದೆಲೆಯ ಬಣ್ಣ ನನ್ನ ಚೆಲುವೆಯ ಮೈಬಣ್ಣ  ..
ಹುಣ್ಣಿಮೆ ಚಂದ್ರನ ಬೆಳಕನ್ನೂ ಹೀರಿ ಕಣ್ಣಲ್ಲೇ ಕೊಲ್ಲೋ ಚೆಲುವೆ ..
ನೋಡಬೇಕವಳ ತುಟಿಯ ಕೊಂಕುತನವನ್ನ ..
ಸದ್ದಾಗದಂತೆ ಚಿಟ್ಟೆಯೂ ಕಾಲು ಕಿತ್ತಿವೆ  ... 
ಅವಳ ಸ್ಪರ್ಶಕೆ ಬಂದ ಹೂಗಳೂ ...ಮೆಲ್ಲಗೆ ನಿದ್ದೆ ಹೋಗಿವೆ ...
ಬೀಸಿ ಬಂದ ಗಾಳಿ ..ಅವಳ ನೋಡುತ್ತಲೇ ಮೆಲ್ಲಗೆ 
ಪಕ್ಕ ಸರಿದು ಮುಂಗುರುಳ ನೀವಿ  ಹೋಗಿದೆ ..
ಹಸಿರ ಮರಗಳೆಲ್ಲ ಇಬ್ಬನಿಯ ಹಾಗೆ ತಬ್ಬಿ ಹಿಡಿದಿವೆ ..
ಎಲ್ಲಿ ಜಾರುವುದೋ ಎಂದು ...
ನೋಡಬೇಕವಳ ಚೆಲುವ ... 
ಮುಂಜಾವಿನ ಬಿನ್ನಾಣ ಗಳನೆಲ್ಲ  ..
ಹರವಿ  ಕುಳಿತಿದೆ ಪ್ರಕೃತಿ ... ನನ್ನವಳ ಚೆಲುವಿಗೆ ಸಾಟಿಯಾಗಲು..
ನಾನೋ .. ಎಲ್ಲ ನೋಡುತ್ತಲೇ ಬಂದಿಯಾಗಿದ್ದೆ...
ಅವಳ ಬಿಸಿ ಅಪ್ಪುಗೆಯಲ್ಲಿ ... 

 
     

Tuesday, July 26, 2011


ಮನದ ಮಾತಿಗೆ ಮೌನದ ಬೇಲಿಯೇಕೆ? 
ಹೇಳಿಬಿಡು ಒಮ್ಮೆ ...ಬಚ್ಚಿಟ್ಟುಕೊಂಡಿರುವ ಎಲ್ಲ 
ಬಾವನೆಗಳ....
ಕೊಲ್ಲಬೇಡ ನನ್ನ ಎಲ್ಲವನೂ ಮುಚ್ಚಿಟ್ಟು...
ಹೇಳಿಬಿಡು ಒಮ್ಮೆ ಮುಚ್ಚಿಟ್ಟು ಕೊಂಡಿರುವ ಕನಸುಗಳ ...
ಕಳೆಯಬೇಕಿದೆ ..ನಿನ್ನ ಜೊತೆ ಎಷ್ಟೋ ಮುಸ್ಸಂಜೆಗಳನು 
ನಿನ್ನ ಸಂಗಾತಿಯಾಗಿ ..
ಹೇಳಿಬಿಡು ಒಮ್ಮೆ ನೀ ಪ್ರೀತಿಸುವುದ ...
ಹಂಚಿಕೊಳ್ಳುವುದಿದೆ ..ನಿನ್ನ ಆ ಚೂರು ಪ್ರೀತಿಯ ..
ಬಾವನೆಗಳ ...ಕನಸುಗಳ ....ಜೀವನ ಪರ್ಯಂತ ...
ನನ್ನ  ಮೌನವ  ಆಲಿಸು..
ಅದು ಒಲವ ಹಾಡುತ್ತದೆ ...
ಮುಗಿಲಿನಾಚೆಯ ಮಾತುಗಳ ಪಿಸುಗುಡುತ್ತದೆ..
ನಿನ್ನ ಹಾಡಿಗೆ ದನಿಗೂಡುತ್ತದೆ...
ಹಾಡತೊಡಗಿದರೋಮ್ಮೆ... ವರ್ಷಧಾರೆಯಾಗಿ ತಂಪೆರೆಯುತ್ತದೆ ..
ಹೇಳಿಬಿಡು ಒಮ್ಮೆ ..ಎಲ್ಲವನೂ ಮುಚ್ಚಿಡಬೇಡ 
ಮನದ ಮಾತಿಗೆ ಮೌನದ ಬೇಲಿ ಹಾಕಿ ...

Saturday, July 23, 2011



ಹಾಗೆ ಸುಮ್ಮನೆ  ನಿನ್ನ ಜತೆಯಲ್ಲಿ ಕೈ ಕೈ ಬೆಸೆದು ನಡೆದ 
ಆ ರಾತ್ರಿ , 
ನದಿ ದಂಡೆಯ ಬಂಡೆಗಳ ಸಂದು ಗೊಂದುಗಳ ನಡುವೆ 
ಸುಮ್ಮನೆ ತಲೆಯಿಟ್ಟು.....
 ತೀಡಿದ ನಿನ್ನ ಮುಂಗುರುಳ ತುದಿಯಲ್ಲಿ ,ಕಣ್ಣ ರೆಪ್ಪೆಗಳ ನವಿರಾಗಿ ಮುಚ್ಚಿ 
ಹಾಗೆ ಸುಮ್ಮನೆ ಒತ್ತಿದ ತುಟಿಗಳ ಗುರುತು .....
ಹರಿವೆ ನೀರ ಜುಳು ಜುಳು ಸದ್ದನು ಸುಮ್ಮಗೆ ಆಲಿಸಿ ,
ನೀರ ಅಲೆಯಲ್ಲಿ ತಲೆಯಿಟ್ಟು ...
ಹಾಗೆ ಸುಮ್ಮನೆ ಬಿಗಿದಪ್ಪಿದ ಮನಸಿಗೆ ....
ನೀಲಾಕಾಶವ ನೊಡುತ್ತ ....ಮಿನುಗೋ ನಕ್ಷತ್ರಗಳ ಪೋಣಿಸಿ 
ಹಾಗೆ ಸುಮ್ಮನೆ ಜೋಡಿಸಿಟ್ಟ ನನ್ನ ನಿನ್ನಯ ಹೆಸರು ....
ಚದುರಿದ ನಕ್ಷತ್ರಗಳನೆಲ್ಲ ಕೂಡಿಸಿ ,ಹಾಗೆ ಸುಮ್ಮನೆ 
ಕಟ್ಟಿಕೊಂಡ ಪುಟ್ಟ ನನ್ನ ನಿನ್ನಯ ಗೂಡು ...
ಎಲ್ಲ ಬಂದು ನಿನ್ನ ನೆನಪನ್ನು  ಇರ ಹೇಳುತ್ತಿವೆ ...
ಹಾಗೇ ಸುಮ್ಮನೆ ....


Saturday, July 2, 2011

ನಿನ್ನ ಕಣ್ಣುಗಳು ....


ನಿನ್ನ ಸುಂದರ ಕಣ್ಣುಗಳು ...
ಆಗಸದಲಿ ತುಂಬಿದ ದಟ್ಟನೆಯ ಮೇಘಗಳ ಸಾಲು ..
ಕಣ್ಣೋಟಗಳ ಮಿಲನವಾದಾಗ ..
ನನ್ನೆದಲ್ಲಿ ಮಿಂಚುಗಳ ಸಾಲು ....

ನಿನ್ನ ಆ ಕಣ್ಣುಗಳು ....
ನನ್ನೆದೆಯ ಕನಸ ಕಲ್ಪನೆಯ ಕೂಸುಗಳು ...
ಎಷ್ಟೋ ಬಾವನೆಗಳ , ಅಷ್ಟೇ ಆಸೆಗಳ 
ಅಡಗಿಸಿಟ್ಟ ತಿಳಿನೀರ ಸರೋವರ ...

ನಿನ್ನ ಕಣ್ಣುಗಳು ....
ಸ್ವಚ್ಛ , ನಿರ್ಮಲ, ನಿಷ್ಕಲ್ಮಶ ...
ಮನದ ಬಾವನೆಗಳೆಲ್ಲ ತೆರೆದಿಟ್ಟ ....
ಕನ್ನಡಿ ಹಾಗೆ ....
ಮನದ ಪ್ರತಿಬಿಂಬ ನಿನ್ನ ಈ ಕಣ್ಣುಗಳು ...

Sunday, May 1, 2011



ಇದೀಗ ತಾನೇ ಚದುರುತ್ತಿವೆ  .. ತುಂಡು ಮೋಡಗಳ ಜೊತೆ ,
ನೀಲಾಕಾಶದಲ್ಲಿ ಹಾಗೆ ಸುಮ್ಮನೆ 
ಒಂದಷ್ಟು ಅಕ್ಷರಗಳನು ಪೋಣಿಸಿಟ್ಟು ಗೀಚಿದ ನಿನ್ನಯ ಹೆಸರು ..
ಒಂದಷ್ಟು ಮಳೆ  ಹೊಯ್ದಂತೆ, ತೊಯ್ದ ಮರಳಿನ ಮೇಲೆ 
ಉಗುರ ತುದಿಯಲ್ಲಿ ತೀಡಿದ ,ನನ್ನನಿನ್ನಹೆಸರು....
ಬೇಕಂತಲೆಂದೇ ಬಿತ್ತಿದ ಒಂದಷ್ಟು ಬೀಜಗಳು 
ಮೊಳಕೆಯಡದಿವೆ ಅಚ್ಚಾದ ಹಸುರ ನೆಲದ ಮೇಲೆ ...
ಕೈ ಕೈ ಹಿಡಿದು ತಬ್ಬಿದ ಮನದ ಹಸಿರು ಇನ್ನೂ ಹಸಿಯಾಗಿಯೇ 
ಕನಸ ಕಾಡಿವೆ..
ಇನ್ನು ಹಾಗೇ ಬಾಕಿಯಾಗಿಯೇ  ಉಳಿದಿದೆ ಜೊತೆಯಲ್ಲಿ ಕಂಡ ಎಷ್ಟೋ 
ಕನಸುಗಳು ...
ಮುಂಗುರುಳ ತಿರುವಿ ತುಟಿಯ ಮೀಟಿದ  ಕೈಯ ಬೆರಳು ಗಳು...
ಕಚ್ಚಿದ ಗಾಯವಿನ್ನೂ ಮರೆತಿಲ್ಲ ...
ಎಲ್ಲವೂ ಹಾಗೆ ಇದೆ ಇನ್ನೂ ಹಸಿಯಾದ ಸವಿಗನಸು 
ನನಸಾಗದೆ ಹಳೆಯದನ್ನೇ ಮೆಲುಕ ಹಾಕಿವೆ ..
ಬಾಕಿಯಾಗಿಯೇ  ಉಳಿದಿದೆ ಇನ್ನೂ 
ಕನಸುಗಳೆಂಬ ಅಸಲು ಬಡ್ಡಿಗಳ ಲೆಕ್ಕಾಚಾರ ...